Hi

Hi

Saturday, 8 October 2016

ಹ್ರದಯ-ವಿದಾಯ

ಹ್ರದಯ-ವಿದಾಯ



ಹ್ರದಯ- ವಿದಾಯ ಈ ಜೋಡಿಪದಗಳು ಮೆಲ್ನೋಟಕ್ಕೆ ಪ್ರಾಸವಾಗಿದ್ದರೂ ಇವುಗಳ ನಡುವಿನ ಸಂಬಂಧದ ವೈಖರಿಯೇ  ಬೇರೆ.ಸಾಮನ್ಯರಂತೆ ಇದ್ದವರನ್ನ ಒಂದುಗೂಡಿಸುವ ಕಾರ್ಯ ಹ್ರದಯದ್ದು.ಹ್ರದಯ ಮನದ ಮಿತ್ರ ಹ್ರದಯಕ್ಕೆ ನೋವಾದರೆ ಮನಕ್ಕೆ ನೋವಾದಂತೆ,ಹ್ರದಯಕ್ಕೂ ಹಾಗೆಯೇ ....ವಿದಾಯ ಎಂದರೆ ವಿಂಗಡಿಸಿ ದೂರಮಾಡು ಎಂದರ್ಥ.ವಿದಾಯ ಎನ್ನುವುದು ಒಂದರ್ಥದಲ್ಲಿ ಹ್ರದಯಕ್ಕೆ ಎರಗುವ ಸಿಡಿಲಿದ್ದಂತೆ.ಹ್ರದಯ ಪ್ರೀತಿಗಾಗಿ ಇರೋದು,ನೋವನ್ನು ಹಂಚಿಕೊಳ್ಳಲ್ಲಾ ಆದರೂ ಮಿತ್ರತ್ವದ ಅವಿನಾಭಾವ ಸಂಬಂಧದಿಂದ ಮನ ಕುಗ್ಗುತ್ತದೆ.ಇಂತಹ ಸಂದರ್ಭದಲ್ಲಿ ಮಿತ್ರನ ಚೇತರಿಕೆಗೆ ಹ್ರದಯ ಮುಂದಾಗಬೇಕು,ಮುಂದಾಗುತ್ತದೆ.ಇದೆ ಸ್ನೇಹ....ನಿಮ್ಮ ಮನದಲ್ಲಿ ಒಬ್ಬ ವ್ಯಕ್ತಿ ಸಂತೋಷವಾಗಿರಲು ಏನಿರಬೇಕು ಎಂಬ ಪ್ರಶ್ನೆ ಹುಟ್ಟಿಕೊಂಡರೆ...ಅವನ ಸ್ನೇಹಿತರು ಜೋತೆಗಿರಬೇಕು ಎನ್ನುವುದು ಸಮರ್ಪಕವಾದ ಉತ್ತರ..ವ್ಯಕ್ತಿಯ ಜೀವನದ ಪ್ರತಿ ಘಟ್ಟದಲ್ಲು ಸ್ನೇಹಿತರಿರುತ್ತಾರೆಸ್ನೇಹಿತರೆಂದರೆ ಯಾರು?ಸ್ನೇಹಿತರೆಂದರೆ ಸ್ನೇಹ ಭಾವ ಉಳ್ಳವರು.ಯಾರು ಬೇಕಾದರೂ ಆಗಬಹುದು.ತಂದೆ-ತಾಯಿ, ಬಂಧು-ಬಳಗ.ನೆರೆ- ಹೊರೆ ಹೀಗೆ....ಹೆಚ್ಚಾಗಿ ಸಮವಯಸ್ಕರು.ಸಹಪಾಠಿಗಳು, ಜೋತೆಯಲ್ಲಿ ಕೆಲಸಮಾಡುವವರು ಸ್ನೇಹಿತರಾಗುತ್ತಾರೆ.ಇನ್ನೂ ಕೆಲವಕ್ಕೆ ಎಲ್ಲೊ ನೋಡಿದ,ನೋಡದೆ ಮಾತಾಡಿದ ವ್ಯಕ್ತಿಗಳ ನಡುವೆ ಗಾಢ ಸ್ನೇಹವಾಗುವುದುಂಟು.ಇಂಥ ಅನೇಕ ಉದಾಹರಣೆಗಳು ನಡೆದಿವೆ. ವಿಚಿತ್ರ. ಎಂದರೆ ರಾತ್ರಿ ಕನಸಿನಲ್ಲಿ ಕಂಡ ವ್ಯಕ್ತಿ ನಿಜ ಜೀವನದಲ್ಲಿ ಆಪ್ತ ಸ್ನೇಹಿತ.!!ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತದ್ದೆ ಅಲ್ಲಿ ಅನೇಕರು ನನ್ನ ಸ್ನೇಹಿತರು.ಅದರೆ ಅವರು ನನ್ನ ಗೆಳೆಯರು ಎಂಬ ಭಾವನೆ ಬಂದಿದ್ದು ಹೈಸ್ಕೂಲು ಸೇರಿ  ತಿಂಗಳಾದ ಮೇಲೆನೆ.ಸ್ನೇಹ ಆಳವಾಗಲು ಸ್ನೇಹಿತರ ದರ್ಶನದ ನಡುವೆ ಅಂತರವಿರಬೇಕು.ಆ ಅಂತರ ಹೆಚ್ಚಾದರೂ ತೊಂದರೆಯೇ..ಎನೇ ಆಗಲಿ ನಮ್ಮ ನಡೆ-ನುಡಿಗಳಿಂದಲೆ ಸ್ನೇಹ ಹಬ್ಬುವುದು,ಗೆಳೆತನ ಉಳಿಯವುದು.ವಿದಾಯಕ್ಕೆ ವಿದಾಯ ಹೇಳೊಣ...🙏                                     ಸಂದೇಶ ಪೂಜಾರಿ ಗುಲ್ವಾಡಿ

No comments:

Post a Comment